ಮಾಲ್ಯವಂತ ರಘುನಾಥ ದೇವಾಲಯ ಕರ್ನಾಟಕ ರಾಜ್ಯದ ಬಳ್ಳಾರಿಯ ಕಮಲಾಪುರ ಎಂಬ ಊರಿನಲ್ಲಿ ಇದೆ. ಈ ದೇವಾಲಯ ಶ್ರೀರಾಮ ದೇವರಿಗೆ ಸಮರ್ಪಿಸಲಾಗಿದೆ. ಕಮಲಾಪುರದ ಮುಖ್ಯರಸ್ತೆಯಿಂದ ಸುಮಾರು ೦೨ ಕಿ.ಲೊ ಆಚೆಗೆ ಈ ವಿಶಾಲವಾದ ಮಾಲ್ಯವಂತ ಬೆಟ್ಟವಿದೆ. ಈ ಸ್ಥಳದಲ್ಲಿ ರಘುನಾಥ ದೇವಾಲಯವಿದೆ. ://...//:Malyavanta_raghunatha_temple. == ಪುರಾಣ == ಸೀತಾ ದೇವಿಯ ಹುಡುಕಾಟದಲ್ಲಿ ಶ್ರೀರಾಮ, ಲಕ್ಷ್ಮಣ ಹಾಗು ವಾನರ ಸೇನೆ ಇದ್ದಾಗ ಮಳೆಗಾಲ ಆರಂಭವಾಗಿತ್ತು. ಈ ಮಳೆಗಾಲ ಮುಗಿಯುವವರೆಗೂ ಆಶ್ರಯ ಪಡೆಯಲು ಶ್ರೀರಾಮ ಹಾಗೂ ಅವರ ಸೇನೆ ಇದೇ ಮಾಲ್ಯವಂತ ಬೆಟ್ಟವನ್ನು ಆಯ್ಕೆಮಾಡಿ ಈ ಬೆಟ್ಟದ ಕಡೆಗೆ ಒಂದು ಬಾಣವನ್ನು ಹೊಡೆದರು. ಈ ಬಾಣದಿಂದ ಆ ಬೆಟ್ಟದ ತುದಿಯಲ್ಲಿ ಒಂದು ‍ಸೀಳು ಬಂದಿತ್ತು. ನಂತರ ಶ್ರೀರಾಮ ಹಾಗು ಅವರ ಸೇನೆ ಮಳೆಗಾಲ ಮುಗುಯುವವರೆಗು ಇಲ್ಲಿಯೇ ನೆಲೆಸಿದ್ದರು. ನಂತರ ಲಂಕಾ ಕಡೆಗೆ ತಮ್ಮ ಪಯಣವನ್ನು ಸಾಗಿಸಿದರು. == ರಘುನಾಥ ದೇವಾಲಯ == ಈ ದೇವಾಲಯವು ವಿಶಾಲವಾಗಿದ್ದು ಇಲ್ಲಿ ಶ್ರಿರಾಮ ಹಾಗು ಲಕ್ಷ್ಮಣರ ವಿಗ್ರಹವೂ ಅವರು ಕೂತಿರುವ ಆಕಾರದಲ್ಲಿದೆ ಹಾಗು ಸೀತಾ ದೇವಿಯು ನಿಂತುಕೊಂಡಿರುವ ಆಕಾರದಲ್ಲಿದೆ. ಹಾಗೆ ಹನುಮಂತನು ತಲೆ ಬಾಗಿರುವ ಹಾಗೆ ವಿಗ್ರಹಿಸಲಾಗಿದೆ. ಈ ದೇವಾಲಯವನ್ನು ಶ್ರೀರಾಮರಿಗೆ ಸಮರ್ಪಿಸಲಾಗಿದೆ. ಈ ದೇವಾಲಯದ ಸುತ್ತ-ಮುತ್ತಲಿನಲ್ಲಿ ಡೊಡ್ಡ ಗಾತ್ರದ ಕಲ್ಲು ಬಂಡೆಗಳಿವೆ. ಈ ದೇವಾಲಯ ಸಂಕೀರ್ಣವು ಹಂಪಿ ಯಾವುದೇ ದೊಡ್ಡ ದೇವಾಲಯ ಸಂಕೀರ್ಣಗಳಿಗಿಂತ ಭಿನ್ನವಾಗಿದೆ. ಸಂಕೀರ್ಣದ ಮಧ್ಯಭಾಗದಲ್ಲಿರುವ ಮುಖ್ಯ ದೇವಾಲಯದ ಅಕ್ಷದಲ್ಲಿ ಸುಣ್ಣದ ಕಂಬದ ಹಾಲ್ ನಿಂತಿದೆ. ದೇವಾಲಯದ ಸಂಯುಕ್ತ ಎದುರಿಸುತ್ತಿರುವ ಆವರಣ ಗೋಡೆಯ ಉದ್ದಕ್ಕೂ ಉದ್ದನೆಯ ಕಂಬಗಳು ಇವೆ. ಇದನ್ನು ಯಾತ್ರಾರ್ಥಿಗಳು ಪ್ರಾರ್ಥನೆಗಾಗಿ ಆಶ್ರಯಸ್ಥಾನವಾಗಿ ಬಳಸುತ್ತಾರೆ. ಕಲ್ಯಾಣ ಮಂಟಪ (ದೊಡ್ಡ ಪೆವಿಲಿಯನ್) ನೈಋತ್ಯ ಭಾಗದಲ್ಲಿದೆ. ದೇವಿಯ ಉಪ-ಮಂದಿರವು ಮುಖ್ಯ ದೇವಾಲಯದ ಉತ್ತರ ಭಾಗದಲ್ಲಿದೆ. ದೇವಾಲಯದ ದಕ್ಷಿಣ ಭಾಗದಲ್ಲಿ ನೀವು ಒಳ ಗೋಡೆಯ (ಬೌಲ್ಡರ್) ಮೇಲ್ಮೈಯಲ್ಲಿ ಕೆತ್ತಿದ ಕೃತಕ ಕೊಳವೆಯ ಚಿತ್ರದೊಂದಿಗೆ ನೈಸರ್ಗಿಕ ಬಾವಿ ಕಾಣುವಿರಿ. == ವಿಶಿಷ್ಟತೆ == ದೇವಾಲಯದ ಆಕರ್ಷಣೀಯ ಮತ್ತು ವಿಶಿಷ್ಟ ಅಂಶವೆಂದರೆ ಅದರ ಒಳ ಗೋಡೆ ಕೆತ್ತನೆಗಳು. ಒಳಗಿನ ಗೋಡೆಗಳಾದ್ಯಂತ ಮೀನುಗಳು ಮತ್ತು ಇತರ ಪೌರಾಣಿಕ ಮತ್ತು ವಾಸ್ತವಿಕ ಸಮುದ್ರ ಜೀವಿಗಳ ಕೆತ್ತನೆ ಹರಡಿದೆ. ಮಲ್ಯವಂತ ರಘುನಾಥ ದೇವಸ್ಥಾನವು ಸೂರ್ಯನನ್ನು ನೋಡಲು ಮತ್ತು ಗೋಲ್ಡ್ಸ್ಟೋನ್, ಅಂಬರ್ ಮತ್ತು ಷಾಂಪೇನ್ಗಳ ಮರೆಯಾಗುತ್ತಿರುವ ಛಾಯೆಗಳಲ್ಲಿ ಚದುರಿದ ಅವಶೇಷಗಳ ಮಿನುಗುವಿಕೆಯನ್ನು ನೋಡಲು ಸೂಕ್ತ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ.ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಗರ್ಭಗುಡಿಯಲ್ಲಿರುವ ವಿಗ್ರಹಗಳನ್ನು ಒಂದೇ ಬಂಡೆ ಇಂದ ಕೆತ್ತಿರುವುದು.ಅದಕ್ಕಾಗಿ ಅದನ್ನು ಅಖಂಡ ಶಿಲ್ಪಗಳು ಎಂದು ಕರೆಯುತ್ತಾರೆ ಮತ್ತು ಈ ಶಿಲ್ಪಗಳು ನೋಡಲು ಅತ್ಯತ್ಭುತವಾಗಿವೆ. == ಉಲ್ಲೇಖಗಳು ==